Friday, January 18, 2019

ಶ್ರೀ ರಘುಪ್ರಿಯ ತೀರ್ಥರು

ಶ್ರೀ ರಘುಪ್ರಿಯ ತೀರ್ಥರು...

ಫೆಬ್ರವರಿ ೨೭ ೧೯೮೭( ಮಾಘ ಶುದ್ಧ ದ್ವಿತಿಯಾ) ಅನೇಕ ಪಂಡಿತರು ಪಿಠಾಕಾಂಕ್ಷಿಗಳಾಗಿದ್ದರು ಅದೃಷ್ಟ ಲಕ್ಷ್ಮೀ ಗಲಗಲಿ ನಾರಾಯಣ ಆಚಾರ್ಯರಿಗೆ ಒಲಿದು ಬಂದಿದ್ದಳು.

ಖಜುರಿ (ಗುಲ್ಬರ್ಗಾ ಜಿಲ್ಲೆ) ಸತ್ಯಪ್ರಮೋದ ತೀರ್ಥರ ಪರಮಾನುಗ್ರಹಕ್ಕೆ ಪಾತ್ರರಾಗಿ ರಘುಪ್ರಿಯ ತೀರ್ಥರು ಜನ್ಮ ತಾಳಿದರು.

ಆಶ್ರಮ ಪೂರ್ವದಲ್ಲಿ ಇವರು ಬಹಳ ಸೂಕ್ಷ್ಮ ಪ್ರಕೃತಿಯ ಸ್ವಭಾವದವರು.ಇಂಥವರು ಹೇಗೆತಾನೆ ಕಠಿಣ ಸನ್ಯಾಶ್ರಮ ನಡೆಸಿಯಾರು ಎಂದು ಎಲ್ಲರೂ ವಿಚಾರಮಾಡಿದರು.

ಆದರೆ ಸತ್ಯಪ್ರಮೋದ ತೀರ್ಥರು ಪರಮಾನುಗ್ರಹದ ರಕ್ಷಾ ಕವಚ ಧರಿಸಿದ ರಘುಪ್ರಿಯ ತೀರ್ಥರು ಪ್ರತಿನಿತ್ಯ ಸೀತಾ ಸಮೇತ ವೈಕುಂಠ ರಾಮದೇವರನ್ನು ಕಠಿಣ ವೃತ‌ನಿಯಮಗಳೊಂದಿಗೆ ಪೂಜಿಸಿದರು. ಕೂಡಲಿ‌ ಮಠದ ಪರಂಪರೆಯಲ್ಲಿ ಮೊದಲಬಾರಿಗೆ ಆಸೆತು ಹಿಮಾಚಲ ಯಾತ್ರೆ ಮಾಡಿದ ಕೀರ್ತಿ ರಘುಪ್ರಿಯ ತೀರ್ಥರಿಗೆ ಸಲ್ಲುತ್ತದೆ.

 ಶ್ರೀ ರಘುಪ್ರಿಯ ತೀರ್ಥರು ಗ್ರಾಮೈಕ ರಾತ್ರಿ ಸಂಚಾರ ಮಾಡುತ್ತಾ ಇಡಿ ಭಾರತದಲ್ಲಿ ಭಕ್ತರ ಉದ್ದಾರ ಮಾಡಿದ್ದಾರೆ. ವಿಶೇಷ ಎನೆಂದರೆ ಇವರು‌ *ವಾಯುಸ್ತುತಿ ರತಿ ಪ್ರಿಯರು* ಭಕ್ತರು ಯಾವುದೇ ರೀತಿಯ ಸಮಸ್ಯೆಯ ಪರಿಹಾರಕ್ಕೆ ಸ್ವಾಮಿಗಳ ಹತ್ತಿರ ಬಂದರೆ ಅವರು.. *ವಾಯುಸ್ತುತಿ ಬರತದೊ ಇಲ್ಲೊ ಹ್ಮ ತತ್ವಜ್ಞಾನ ಶ್ಲೋಕ ಅನ್ನು ಕೂಸು* ಎಂದು ವಾಯುಸ್ತುತಿಯಿಂದ ಅಭಿಮಂತ್ರಿಸಿ ಮಂತ್ರಾಕ್ಷತೆ ಕೊಟ್ಟು ಭಕ್ತರ ಉದ್ದಾರ ಮಾಡಿದ್ದಾರೆ.

ಅಪಾರ ಶಿಷ್ಯ ವಾತ್ಸಲ್ಯರಾದ  ಸ್ವಾಮಿಗಳಲ್ಲಿ ಲೌಕಿಕ, ಪರಮಾರ್ಥಿಕ ಬೇಡಿಕೆ ಇಟ್ಟು ಬಂದವರು‌ ಎಂದೂ ಬರಿಗೈಯಲ್ಲಿ ಹೊದದ್ದೆ ಇಲ್ಲ.

ಸಂತಾನ, ಪ್ರೇತ ಭಾಧೆ, ಉದ್ಯೊಗ ಲಾಭ, ಜಮಿನು ಆಸ್ತಿಗಳಲ್ಲಿ ಲಾಭ ಹಿಗೆಯೆ ಅನೇಕ ಜನರು ಇವರಿಂದ ಅನುಗ್ರಹಿತರಾಗಿದ್ದಾರೆ.

ಅವರ ಅನುಗ್ರಹಕ್ಕೆ ನಾನೇ ಜೀವಂತ ಸಾಕ್ಷಿ..
ಈಗ ಧರ್ಮಾನುಷ್ಠಾನಕ್ಕೆ ಸಹಾಯವಾಗುವ ಉದ್ಯೋಗದಲ್ಲಿ ಇದ್ದನೆ. ಎಂದರೆ ಇದು ಶ್ರೀ ರಘುಪ್ರಿಯ ತೀರ್ಥರ ವಿಶೇಷ ಅನುಗ್ರಹವೇ.

...ಮುಂದುವರೆಯುವದು....

No comments:

Post a Comment

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...