Friday, May 5, 2017

ಶ್ರೀ ವೆಂಕಟೇಶ್ವರ ಸ್ವಾಮಿ ಕಾಂಚೀಪುರಂ

ಈ ಫೋಟೋದಲ್ಲಿ ಇರುವ ಶ್ರೀ ವೆಂಕಟೇಶ್ವರ ಸ್ವಾಮಿ ಕಾಂಚೀಪುರಂ ಶ್ರೀ ಪವಲವನ್ನ ಪೆರುಮಾಲ್ ಸ್ವಾಮಿ. ಝೂಮ್ ಮಾಡಿ ಆ ಸ್ವಾಮಿಯ ಕಣ್ಣು ನೋಡಿರಿ ಆ ಸ್ವಾಮಿಯ ಕಣ್ಣು ನಮ್ಮನ್ನು ನೋಡುವ ಅನುಭವ ಆಗುತ್ತದೆ. ಇಂತಹ ಸ್ವಾಮಿ ವಿಗ್ರಹ ಪ್ರಪಂಚದಲ್ಲಿ ಎಲ್ಲೂ ಇಲ್ಲವಂತೆ. ಸ್ವಾಮಿಯ ಕಣ್ಣು ನಮ್ಮನ್ನು ನೋಡುತ್ತಿದ್ದರೆ ಆ ತೃಪ್ತಿ ಆ ಸಂತೋಷ ಎಲ್ಲೂ ಸಿಗುವುದಿಲ್ಲ.

Thursday, May 4, 2017

ಸರ್ವ ರೋಗಗಳಿಗೂ ದಿವ್ಯೌಷಧ ಗೋ ಮೂತ್ರ

ಸರ್ವ ರೋಗಗಳಿಗೂ ದಿವ್ಯೌಷಧ ಗೋ ಮೂತ್ರ...
  ಇಟ್ಟರೆ ಸಗಣಿಯಾದೆ ತಟ್ಟಿದರೆ ಬೆರಣಿಯಾದೆ. ಸುಟ್ಟರೆ ನೊಸಲಿಗೆ ವಿಭೂತಿಯದೆ. ನೀನಾರಿಗಾದೆಯೋ ಎಲೆಮಾನವ ಇದು ಪಶುವಿನ ಉಪಯೋಗವನ್ನು ವಿವರಿಸುವ ಹಿಂದಿನ ತಲೆಮಾರಿನ ಹಾಡು.
ಪಶುಗಳು ಯಾವ ರೀತಿ ನಮ್ಮ ಬದುಕಿಗೆ ಉಪಯೋಗವೆಂದು ಹೆಚ್ಚು ಉಪಯುಕ್ತ ಎಂದು ತಿಳಿದುಕೊಳ್ಳಲು  ಭಾರತೀಯ ಸಂಸ್ಕೃತಿ ಹಸುವಿಗೆ ವಿಶೇಷ ಸ್ಥಾನ ನೀಡಲಾಗಿದೆ. ಹಸು ಎಲ್ಲಾ 33 ದೇವರುಗಳ ದೇವಸ್ಥಾನ ಅವಿಭಾಜ್ಯ ಅಂಗವಾಗಿದೆ.
 ಇಡೀ ವಿಶ್ವದ ತಾಯಿ ಹಸು ಎಂದು ಕರೆಯುತ್ತಾರೆ . ಕಾರಣ ಜನ್ಮ ನೀಡುವ ತಾಯಿ ಕೇವಲ ಒಂದು ಅಥವಾ ಎರಡು ವರ್ಷಗಳು ಅದರ ಮಗುವಿಗೆ ಹಾಲು ನೀಡುತ್ತದೆ, ಆದರೆ ಹಸು ತನ್ನ ಜೀವಿತಾವಧಿಯ ಉದ್ದಕ್ಕೂ ತಾಯಿ ಎಂದು ಮಕರಂದ ರೀತಿಯಲ್ಲಿ ಇದು ಹಾಲು ನೀಡುತ್ತದೆ.ಹಸು ಮೊಬೈಲ್ ಔಷಧಾಲಯದ. ಇದು ಔಷಧಿಗಳ ನಿಧಿ ಹೊಂದಿದೆ. ಹಸುವಿನ ಮೂತ್ರ ಚಿಕಿತ್ಸೆ ಗುಣಪಡಿಸಲಾಗದ ಮತ್ತು ವಾಸಿಮಾಡಬುಹುದಾದಂತಹ ಹಲವಾರು ರೋಗಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಪವಿತ್ರ ಗ್ರಂಥಗಳು, ಅಥರ್ವ ವೇದ ಹಾಗೆ, ಚರಕ ಸಂಹಿತ ಉಲ್ಲೆಕಗಳಿವೆ.        ಹಸು ಮೂತ್ರ ಚಿಕಿತ್ಸೆ ಕ್ಯಾನ್ಸರ್ , ಮಧುಮೇಹ ರೋಗಿಯ, ಏಡ್ಸ್, ಆಸ್ತಮಾ , ಸೋರಿಯಾಸಿಸ್ ಎಸ್ಜಿಮಾ, ರಕ್ತದೊತ್ತಡ , ಹೃದಯ ರೋಗ, ಅಧೀನಮಾಡು, ರಾಶಿಗಳು , ಅಸ್ತಮಾ , ಕೆಮ್ಮು, ಕಫ , ಉಬ್ಬಿರುವ ರಕ್ತನಾಳಗಳು, ಕೊಲೆಸ್ಟರಾಲ್, ಎದೆ ನೋವು, ಏಡ್ಸ್, ಮೈಗ್ರೇನ್, ತಲೆನೋವು , ಒತ್ತಡ, ಮಲಬದ್ಧತೆ, ಇಂತಹ ಸಮಸ್ಯೆಗಳಿಗೆ ಸಹಾಯಕವಾಗುತ್ತದೆ ,  ಥೈರಾಯ್ಡ್, ಎಸ್ಜಿಮಾ, ರಿಂಗ್ವರ್ಮ್, ತುರಿಕೆ ಮತ್ತು ಯಕೃತ್ತು ಅಸ್ವಸ್ಥತೆ, ಮೂತ್ರಪಿಂಡ ಸಮಸ್ಯೆ, ಮತ್ತು ಅನೇಕ ರೋಗ. ಮತ್ತು ಚರ್ಮದ ಇತರ ಸಮಸ್ಯೆಗಳನ್ನು, ಗುಣಪಡಿಸುವ ಸಾಮರ್ಥ್ಯ ಹೊಂದಿದೆ. ಗೋವು ಉಸಿರಾಟ ಪ್ರಕ್ರಿಯೆಯಲ್ಲಿ ಆಮ್ಲಜನಕವನ್ನು ಒಳಗೆಳೆದುಕೊಂಡು ಆಮ್ಲಜನಕವನ್ನೇ ಹೊರಗೆ ಬಿಡುತ್ತದೆ !! ಗೋವಿನ ಒಂದು ಚಮಚ ತುಪ್ಪವನ್ನು ಬೆಂಕಿಗೆ ಸುರಿದಾಗ ಸುಮಾರು ಒಂದು ಟನ್ನುಗಳಷ್ಟು ಆಮ್ಲಜನಕ ಬಿಡುಗಡೆಯಾಗುತ್ತೆ !!. ಗೋವಿಗೆ ವಿಷವನ್ನು ಸತತ 90 ದಿನಗಳವರೆವಿಗೂ ನೀಡುತ್ತಾ ಬಂದರೂ ಅದರ ಹಾಲಿನಲ್ಲಾಗಲೀ, ಹಾಗೂ ಮಾಂಸದಲ್ಲಾಗಲಿ ವಿಷದ ಪ್ರಮಾಣ ಕಿಂಚಿತ್ತೂ ಇರುವುದಿಲ್ಲ…(ವಿಷವೆಲ್ಲಾ ಗಂಟಲಿನ ಒಂದು ಬದಿಯಲ್ಲೇ ಶೇಖರಣೆಯಾಗಿರುತ್ತದೆ) ಪಶುಗಳು ಯಾವ ರೀತಿ ನಮ್ಮ ಬದುಕಿಗೆ ಉಪಯೋಗವೆಂದು ಹೆಚ್ಚು ಉಪಯುಕ್ತ ಎಂದು ತಿಳಿದುಕೊಳ್ಳಬಹುದಾಗಿದೆ.

Wednesday, May 3, 2017

ಕೈಲಾಸ ಟೆಂಪಲ್ ಕೆತ್ತಿದ್ದು ಅನ್ಯಗ್ರಹದವರಾ ನಮ್ಮ ಜನರಾ ?

ಕೈಲಾಸ ಟೆಂಪಲ್ ಕೆತ್ತಿದ್ದು ಅನ್ಯಗ್ರಹದವರಾ ನಮ್ಮ ಜನರಾ ? -

ಈ  ಕೈಲಾಸ್ ಟೆಂಪಲ್

(ಔರಂಗಾಬಾದ್,ಎಲ್ಲೋರಾ)ಅಥವಾ ಕೈಲಾಸನಾಥ ದೇವಾಲಯ 8 ನೇ ಶತಮಾನದಲ್ಲಿ ಶ್ರೀ ಕ್ರಿಷ್ಣ ನ ನಿರ್ಮಾಣ ಎಂಬ ಇತಿಹಾಸವಿದೆ. ಈ ದೇವಸ್ಥಾನವು ಎಲ್ಲ ದೇವಸ್ಥಾನಗಳಂತೆ ಪಾಯತೆಗೆದು ಬುಡದಿಂದ ಕಟ್ಟಿರುವುದಲ್ಲ ಅತೀ ದೊಡ್ಡದಾದ ಒಂದು ಕಲ್ಲಿನ ಬೆಟ್ಟವನ್ನು ಆರಿಸಿಕೊಂಡು ದೇವಸ್ಥಾನದ (ಮೇಲ್ಭಾಗದಲ್ಲಿರುವ ಕಳಸ)ಮೇಲಿನಿಂದ ಕೆತ್ತನೆ ಶುರು ಮಾಡಿ ತಳ ಮಟ್ಟಕ್ಕೆ ಪೂರ್ಣಗೊಳಿಸಿರುವುದು ,ಒಂದು ಸಂಪೂರ್ಣ ಕಲ್ಲಿನ ಬೆಟ್ಟದ ಮದ್ಯದಲ್ಲಿ ಈ ರೀತಿ ಕೆತ್ತನೆ ಮಾಡುವುದು ಅದ್ಭುತವಾಗಿದೆ .

ಈ ದೇವಸ್ಥಾನ ಕೇವಲ 18 ವರ್ಷಗಳಲ್ಲಿ ತಯಾರಾಗಿರಲು ಆಗದು ಕನಿಷ್ಟ 100 ವರ್ಷಗಳ  ಅವಧಿಯಲ್ಲಿ ನಿರ್ಮಿತವಾಗಿರಬಹುದು ಎಂಬುದು ಆಗಿನ ಕಾಲದಲ್ಲಿ ಬಳಕೆಯಲ್ಲಿದ್ದ ವಸ್ತು,ಆಯುಧ,ಉಪಕರಣಗಳ ಬಗ್ಗೆ ಯೋಚಿಸಿ ಪ್ರಖ್ಯಾತ ಎಂಜಿನೀಯರ್ ಗಳು ತಿಳಿಸಿರುವ ವಿಚಾರವಿದು .

ಆದರೆ ಇಷ್ಟು ಕೆಲಸಕ್ಕೆ ಏನಿಲ್ಲವೆಂದರೂ 400,000 ಟನ್ನಿನಷ್ಟು ಕಲ್ಲನ್ನು ಕೆತ್ತಿ ತೆಗೆದು ಹಾಕುವುದು ಸಾದ್ಯವಾ ಅದೂ ಕೇವಲ 18 ವರ್ಷಗಳಲ್ಲಿ  ಹ್ಹ ಹ್ಹ ಹ್ಹ ಈ ಲೆಕ್ಕಾಚಾರದಲ್ಲಿ ಕೆಲಸ ಮಾಡಿದರೆ ಗಂಟೆಗೆ ಏನಿಲ್ಲವೆಂದರೂ 5 ಟನ್ನಿನಷ್ಟು ಕಲ್ಲನ್ನು ಕೆತ್ತಿಹಾಕಬೇಕಾಗುತ್ತದೆ ಈ ಕನಿಷ್ಟ ಅವಧಿಯಲ್ಲಿ ಕೆತ್ತಿ ಹಾಕುವುದಿರಲಿ ಕೆತ್ತಿರುವ 5  ಟನ್ ಕಲ್ಲನ್ನು ಎತ್ತಿ ಹಾಕುವುದೂ ಸಹ ಸಾದ್ಯವಾಗದು.

ಅದಲ್ಲದೇ ದೀಪಕ್ ಶಿಮ್ಕೋಡಾ ಪ್ರೊಫೆಸರ್ ಪ್ರಕಾರ ಈ ಕಲ್ಲನ್ನು ಕೆತ್ತಿಯೇ ನಿರ್ಮಿಸಿದ್ದಾರೆ ಎಂಬುದಕ್ಕೆ ಇದುವರೆಗೂ ದೇವಸ್ಥಾನದ ಅಕ್ಕಪಕ್ಕ ಯಾವುದೇ ಕಲ್ಲಿನ ಚೂರುಗಳ ಕುರುಹು ದೊರಕಿಲ್ಲ.
ಈಗಿರುವ ಹೊಸ ವಿಚಾರವೇನೆಂದರೆ ಈ ಕೈಲಾಸ ಟೆಂಪಲನ್ನು (ಏಲಿಮನ್ಸ್)ಅನ್ಯಗ್ರಹ ಜೀವಿಗಳು ಹೊರಗಿನಿಂದ ಬಂದು ಲೇಸರ್ ಮಾದರಿಯ ಯಂತ್ರದ ಸಹಾಯದಿಂದಲೇ ಇದನ್ನು ನಿರ್ಮಿಸಿರಬಹುದಾ ಎಂದು ಏಕೆಂದರೆ ಒಂದು ಕಲ್ಲಿನಲ್ಲಿ ಕೆತ್ತನೆ ಮಾಡುವಾಗ ಸ್ವಲ್ಪ ಮುಕ್ಕಾದರೂ ಸಹ ಅದನ್ನು ಬಿಸುಟು ಬೇರೊಂದು ಕಲ್ಲಿನಲ್ಲಿ ಮತ್ತೆ ಕೆತ್ತಿರುವ ಸಾದ್ಯತೆಗಳು ಇತಿಹಾಸದಲ್ಲಿದೆ.

ಆದರೆ ಒಂದೇ ದೊಡ್ಡ ಕಲ್ಲಿನಲ್ಲಿ ಅದೂ ಮೇಲ್ಭಾಗದಿಂದ ಕೆಳಗಿನೆಡೆಗೆ ಮುಕ್ಕಾಗದಂತೆ ದೇವಸ್ಥಾನವನ್ನು ನಿರ್ಮಿಸುವುದೆಂದರೆ ಸುಲಭದ ಮಾತೇ.ನಾವು ನಿರ್ಮಿಸಿದ್ದರೆ ಭಕ್ತಿ ಅಥವಾ ಕಲಾಕೌಶಲ್ಯ ಎಂದು ಸಂತೋಷಪಡೋಣ ಆದರೆ ಏಲಿಯನ್ಸಗಳಿಗೆ ಇದನ್ನು ನಿರ್ಮಿಸುವ ಹುಚ್ಚು ಏಕೆ ಬಂತು ಹಾಗೂ ನಿರ್ಮಿಸಿದ್ದರೆ 8 ನೇ ಶತಮಾನದಲ್ಲಿಯೇ ಅದಾವ ಯಂತ್ರವಿತ್ತು ಅವರ ಬಳಿ ಎಂಬುದು ಯೋಚಿಸಬೇಕಾದ ವಿಚಾರವೇ ಸರಿ.
(ಸಂಗ್ರಹಿಸಿದ್ದು)

ಅಂಧವಿಶ್ವಾಸ Vs ಲಾಜಿಕ್‌

* ಸ್ಮಶಾನದಿಂದ ಬಂದ ಮೇಲೆ ಸ್ನಾನ ಮಾಡೋದು

ಅಂಧವಿಶ್ವಾಸ : ಸಾವನ್ನಪ್ಪಿರುವ ಆತ್ಮಕ್ಕೆ ಶಾಂತಿ ಸಿಗುತ್ತದೆ.

ಲಾಜಿಕ್‌ : ಹಿಂದೆ ಹೆಪಟೈಟೀಸ್‌, ಸ್ಮಾಲ್‌ ಪಾಕ್ಸ್‌ ಮೊದಲಾದ ರೋಗಗಳಿಗೆ ಚಿಕಿತ್ಸೆ ಇರಲಿಲ್ಲ. ಆವಾಗ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದ ಮೇಲೆ ಸ್ನಾನ ಮಾಡುತ್ತಿದ್ದರು. ಯಾಕೆಂದರೆ ಡೆಡ್‌ ಬಾಡಿಯಲ್ಲಿರುವ ಯಾವುದೇ ಕೀಟಾಣು ತಮಗೆ ಸಮಸ್ಯೆ ನೀಡದೇ ಇರಲಿ ಎಂದು.
--------------------------
* ಕೊಳದಲ್ಲಿ ನಾಣ್ಯಗಳನ್ನು ಹಾಕುವುದು

ಅಂಧವಿಶ್ವಾಸ : ಭಾಗ್ಯ ಹೆಚ್ಚಾಗುತ್ತದೆ

ಲಾಜಿಕ್‌ : ಮೊದಲು ತಾಮ್ರದ ನಾಣ್ಯಗಳು ದೊರೆಯುತ್ತಿತ್ತು. ತಾಮ್ರದ ವಸ್ತುಗಳು ನೀರಿನಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಮಾಡುತ್ತವೆ. ಆದುದರಿಂದ ಅದನ್ನು ನೀರಿಗೆ ಹಾಕುತ್ತಿದ್ದರು. ಅಲ್ಲದೇ ತಾಮ್ರ ನಮ್ಮ ದೇಹಕ್ಕೆ ಹೆಚ್ಚಿನ ಪೋಷಕ ತತ್ವವನ್ನು ಸಹ ನೀಡುತ್ತದೆ.
-------------------------------
* ಎಲ್ಲಿಯಾದರು ಹೋಗುವಾಗ ಮೊಸರು ತಿನ್ನೋದು

ಅಂಧವಿಶ್ವಾಸ : ಭಾಗ್ಯ ನಿಮ್ಮ ಜೊತೆ ಇರುತ್ತದೆ.

ಲಾಜಿಕ್‌ : ಬೇಸಿಗೆ ಕಾಲದಲ್ಲಿ ಮೊಸರು ತಿನ್ನೋದರಿಂದ ಹೊಟ್ಟೆ ತಂಪಾಗಿರುತ್ತದೆ. ಅಲ್ಲದೇ ಮೊಸರಿನ ಜೊತೆ ಸಕ್ಕರೆ ಬೆರೆಸಿ ತಿನ್ನೋದ್ರಿಂದ ದೇಹಕ್ಕೆ ಗ್ಲೋಕೋಸ್‌ ದೊರೆಯುತ್ತದೆ.
-------------------------------------------
* ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯಬಾರದು

ಅಂಧವಿಶ್ವಾಸ : ಕೆಟ್ಟ ಸಮಯ ಆರಂಭವಾಗುತ್ತದೆ.

ಲಾಜಿಕ್‌ : ಹಿಂದಿನ ಕಾಲದಲ್ಲಿ ನೀರನ್ನು ಉಳಿಸುವ ಸಲುವಾಗಿ ಮಂಗಳವಾರ ಮತ್ತು ಗುರುವಾರ ಕೂದಲು ತೊಳೆಯದೇ ಇರುತ್ತಿದ್ದರು.
--------------------------
* ಬಾಗಿಲಿನಲ್ಲಿ ಲಿಂಬೆ ಮತ್ತು ಮೆಣಸು ಕಟ್ಟುವುದು

ಅಂಧವಿಶ್ವಾಸ : ಕೆಟ್ಟ ದೃಷ್ಟಿಯಿಂದ ಮುಕ್ತಿ ಸಿಗಲು

ಲಾಜಿಕ್‌ : ನಿಂಬೆ ಮತ್ತು ಮೆಣಸಿನಲ್ಲಿರುವ ಸಿಟ್ರಿಕ್‌ ಆ್ಯಸಿಡ್‌ನಿಂದಾಗಿ ಮನೆಯ ಒಳಗೆ ಕೀಟಾಣುಗಳು ಬರದಂತೆ ತಡೆಯುತ್ತದೆ.
--------------------------
* ಗ್ರಹಣದ ಸಮಯದಲ್ಲಿ ಹೊರಗೆ ಹೋಗದೇ ಇರೋದು

ಅಂಧವಿಶ್ವಾಸ : ರಾಹುವಿನ ಪ್ರಭಾವ

ಲಾಜಿಕ್‌ : ಸೂರ್ಯ ಗ್ರಹಣದ ಸಂದರ್ಭ ಬರೀ ಕಣ್ಣಿನಲ್ಲಿ ಸೂರ್ಯನನ್ನು ನೋಡಿದರೆ ರೆಟಿನಾದ ಮೇಲೆ ಪ್ರಭಾವ ಬೀರುತ್ತದೆ.
--------------------------
* ಮಂದಿರದಲ್ಲಿ ಗಂಟೆ ಭಾರಿಸುವುದು

ಅಂಧವಿಶ್ವಾಸ : ಗಂಟೆ ಭಾರಿಸುವುದರಿಂದ ದೇವರಿಗೆ ಸಂತೋಷವಾಗುತ್ತದೆ.

ಲಾಜಿಕ್‌ : ಗಂಟೆ ಬಡಿದ ಮೇಲೆ ಉಂಟಾಗುವ ವೈಬ್ರೇಶನ್‌ನಿಂದಾಗಿ ನಮ್ಮ ದೇಹದ ಮೇಲೆ ಧನಾತ್ಮಕ ಪ್ರಭಾವ ಬೀರುತ್ತದೆ. ಇದರಿಂದ ನಮ್ಮ ಮನಸ್ಸು ಕೇಂದ್ರೀಕೃತವಾಗಲು ಸಹಾಯಕವಾಗುತ್ತದೆ.
(ಸಂಗ್ರಹಿಸಿದ್ದು)

ತಾಂಬೂಲ ಕೊಡೋವಾಗ ಎಚ್ಚರಿಕೆ

*ತಾಂಬೂಲ ಕೊಡೋವಾಗ ಎಚ್ಚರಿಕೆ ಇರಲಿ...!*

೧. ವೀಳ್ಯದೆಲೆ ತಾಂಬೂಲ ಕೊಡೋವಾಗ, ವೀಳ್ಯದೆಲೆ ಆಗಿ ಹೋಗಿದೆ, ಏನು ಅಂದುಕೊಳ್ಳಬೇಡಿ ಅಂಥ ಬರೀ ಹಣ್ಣು ಅಥವಾ ತೆಂಗಿನಕಾಯಿ ಕೊಟ್ಟರೆ.....
"ನೀವು ಮಾಡುವ ಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುತ್ತದೆ ..
ಶುಭಕಾರ್ಯಗಳಾದರೆ ತುಂಬಾ ತೊಂದರೆಗಳಾಗುತ್ತವೆ, ಜನಸಹಾಯ ದೊರೆಯುವುದಿಲ್ಲ ..
ಹಣಕಾಸಿಗೆ ಪರಾದಾಟವಾಗುತ್ತದೆ..."

೨. ನೀವು ಕೊಡುವ ತಾಂಬೂಲದ ವೀಳ್ಯದೆಲೆ ಒಣಗಿದ್ದರೆ...
ಅತಿಯಾದ ನಷ್ಟ, ಅನಾರೋಗ್ಯವಾಗುತ್ತದೆ.., ನಿಮ್ಮ ಕಾರ್ಯಗಳು ಅರ್ಧಕ್ಕೇ ನಿಂತು ಹೋಗುತ್ತವೆ ...

೩. ಯಾರಾದರೂ ಕೊಟ್ಟ ತಾಂಬೂಲವನ್ನು ದೇವರಿಗೆ ಸಮರ್ಪಿಸದೇ, ಯಾವುದೋ ಮೂಲೆಯಲ್ಲಿ ಇಟ್ಟುಬಿಟ್ಟರೆ, ಸಮಾಜದಲ್ಲಿ, ಬಂಧುಗಳಲ್ಲಿ ಗೌರವ ಕಳೆದುಕೊಳ್ಳುತ್ತಾರೆ, ಮಕ್ಕಳಿಗೆ ಮರೆವಿನ ರೋಗ ಬರುತ್ತದೆ...

೪. ಯಾರಾದರೂ ತಾಂಬೂಲ ಕೊಟ್ಟಾಗ ಮನೆಗೆ ತರದೆ ಎಲ್ಲಿಯಾದರೂ ಬಿಟ್ಟು ಬಂದರೆ...
"ನಿಮ್ಮ ಕಾರ್ಯಗಳು ತುಂಬಾ ನಿಧಾನವಾಗುತ್ತದೆ, ವಿವಾಹ ಕಾರ್ಯಗಳಿಗೆ ಅಡಚಣೆಯಾಗುತ್ತದೆ.., ಶುಭ ಕಾರ್ಯ ನಿಧಾನವಾಗುತ್ತದೆ...
ಮಕ್ಕಳ ಮಾನಸಿಕ ಬೆಳವಣಿಕೆ ಕಮ್ಮಿಯಾಗುತ್ತದೆ...

೫. ತಾಂಬೂಲ ಕೆಳಗೆ ಬಿದ್ದರೆ ನಿಮ್ಮ ಕೆಲಸಗಳು ಇನ್ನೇನು ಆಯಿತು ಅನ್ನೋ ಸಮಯದಲ್ಲಿ ಅರ್ಧಕ್ಕೇ ನಿಂತುಹೋಗುತ್ತದೆ ...

೬. ತಾಂಬೂಲ ಕೊಡೋವಾಗ ವೀಳ್ಯದೆಲೆ ಅಡಿಕೆ ಕೊಳೆತಿದ್ದರೆ, ದರಿದ್ರರಾಗುತ್ತೀರಿ, ಸಾಲದ ಸಮಸ್ಯೆ ಜಾಸ್ತಿಯಾಗುತ್ತದೆ. .

*ಯಾರದೇ ಮನೆಯಲ್ಲಿ ತಾಂಬೂಲ ಕೊಟ್ಟರೂ ಮೊದಲು ತಂದು ದೇವರ ಮುಂದೆ ಇಟ್ಟು ನಮಸ್ಕರಿಸಿ, ಆನಂತರ ಸರಿಯಾದ ರೀತಿಯಲ್ಲಿ ಉಪಯೋಗಿಸಿ....*

     💐💐ಎಲ್ಲರಿಗೂ ಶುಭವಾಗಲಿ...💐💐
 (ಸಂಗ್ರಹಿಸಿದ್ದು)

ಮನುಷ್ಯ ಮತ್ತು ದೇವರು

ಮನುಷ್ಯ ದೇವರಿಂದ ಪಡೆಯುವಾಗ *ಲಕ್ಷ, ಕೋಟಿಯನ್ನು ನಿರೀಕ್ಷಿಸುತ್ತಾನೆ,*

ಅದೇ ಮನುಷ್ಯ ದೇವರಿಗಾಗಿ ನೀಡುವಾಗ ಜೇಬಿನಲ್ಲಿ
*ನಾಣ್ಯವನ್ನು ಹುಡುಕುತ್ತಾನೆ,*

ಪ್ರಪಂಚದಲ್ಲಿ ಕಣ್ಣೀರ ಹನಿಗಿಂತ..
*ಬೆವರ ಹನಿ ಶ್ರೇಷ್ಟ.*

ಕಣ್ಣೀರು ಬರುವ ಹಾಗೆ *ನಟಿಸಬಹುದು..!*

ಬೆವರ ಹನಿ ಬರುವ ಹಾಗೆ *ನಟಿಸಲಾಗದು..!!!*
(ಸಂಗ್ರಹಿಸಿದ್ದು)

ಸತ್ಯ ಮತ್ತು ಸುಳ್ಳು

ಹೀಗೊಂದು ಕಥೆ
ಒಮ್ಮೆ ಸತ್ಯ ಸುಳ್ಳು ಎರಡೂ ವಾಕಿಂಗ್ ಹೋಗಿದ್ವು. ಹಾದಿಯಲ್ಲಿ ಒಂದು ಸುಂದರ ನದಿ ಕಂಡಿತು . ಸರಿ ಎರಡೂ ತಮ್ಮ ವಸ್ತ್ರಗಳನ್ನ ತೆಗೆದು ಸ್ನಾನಕ್ಕೆ ಇಳಿದವು .

 ಸುಂದರ ಸಂಜೆಯಲ್ಲಿ ತಂಪಾದ ನದಿಯಲ್ಲಿ ಈಜುತ್ತಾ ಮೈ ಮರೆತವು . ಒಂದಷ್ಟು ಹೊತ್ತಾದ ಮೇಲೆ ಸುಳ್ಳು ಮೇಲೆದ್ದು ಬಂತು. ಸತ್ಯ ಇನ್ನೂ ಮೈ ಮರೆತು ಈಜುತ್ತಾ ಇತ್ತು .

ಸುಳ್ಳು ಅತ್ತಿತ್ತ ನೋಡಿ ಸತ್ಯದ ಬಟ್ಟೆಗಳನ್ನ ಧರಿಸಿ ಹೊರಟು ಬಿಟ್ಟಿತು. ಸಾಕಷ್ಟು ಸಮಯದ ನಂತರ ಸತ್ಯ ಮೇಲೆದ್ದು ಬಂದಾಗ ಅದರ ವಸ್ತ್ರಗಳೇ ಇರಲಿಲ್ಲ .

ಸತ್ಯಕ್ಕೆ ಸುಳ್ಳಿನಧಿರಿಸು ಧರಿಸಲು ಹಿಂಸೆಯೆನಿಸಿತು, ಅಸಹ್ಯ ಎನಿಸಿತು ಅಂದಿನಿಂದ ಸತ್ಯ ಬೆತ್ತಲಾಗೆ ತೆರೆಮರೆಯಲ್ಲೇ ಓಡಾಡಲು ಶುರುಮಾಡಿತು .

ಸುಳ್ಳು ಸತ್ಯದ ಹೊದಿಕೆ ಹೊದ್ದು ತಿರುಗುತ್ತಲೇ ಇದೆ ರಾಜಾರೋಷವಾಗಿ. ಬೆತ್ತಲಾಗೆ ತೆರೆಮರೆಯಲ್ಲೇ ಓಡಾಡಲು ಶುರುಮಾಡಿತು .

ಸುಳ್ಳು ಸತ್ಯದ ಹೊದಿಕೆ ಹೊದ್ದು ತಿರುಗುತ್ತಲೇ ಇದೆ ರಾಜಾರೋಷವಾಗಿ .....

ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು !

ಓಂ ಶ್ರೀ ಸತ್ಯಾತ್ಮತೀರ್ಥ ಗುರುಭ್ಯೋಃ ನಮಃ ಯಾವಯಾವ ಸಂದರ್ಭಗಳಲ್ಲಿ ಗುರುಹಿರಿಯರಿಗೆ ನಮಸ್ಕಾರ ಮಾಡಬಾರದು ! ಕೆಲವೊಂದು ಸಂದರ್ಭದಲ್ಲಿ ಈ ಬ್ರಾಹ್ಮಣರೇ ಮೊದಲಾದ ಗುರು...